ಭಾನುವಾರ, ನವೆಂಬರ್ 1, 2009

ಜಗದೀಶ್ ಶೆಟ್ಟರ್ ಮತ್ತು ಭಿನ್ನರ ಬಳಗ

ರಾಜ್ಯ ವಿಧಾನ ಸಭಾ ಸ್ಪೀಕರ್ ಜಗದೀಶ್ ಶೆಟ್ಟರ್ ಸಜ್ಜನರು,ಸುಸಂಸ್ಕೃತ ರಾಜಕೀಯ ಕುಟುಂಬದಿಂದ ಬಂದವರು. ಈಗ ಅವರ ಹೆಸರೂ ಸುದ್ದಿಯಲ್ಲಿದೆ.ವಿಧಾನಸಭಾಧ್ಯಕ್ಷರಾಗಿ ಅವರು ಕೈಗೊಂಡ ನಿರ್ಧಾರಗಳು ಇದಕ್ಕೆ ಕಾರಣವಲ್ಲ.ಮುಂದಿನ ಮುಖ್ಯಮಂತ್ರಿಯಾಗಿ ಅವರನ್ನು ಆಯ್ಕೆ ಮಾಡಬೇಕೆಂದು ರೆಡ್ಡಿ ಸಹೋದರರು ಶೆಟ್ಟರ್ ಹೆಸರನ್ನು ಚಲಾವಣೆಗೆ ತಂದ ಕಾರಣ ಎಲ್ಲರ ಗಮನ ಅವರ ಮೇಲಿದೆ.

ರೆಡ್ಡಿಗಳು ಶೆಟ್ಟರ್ ಹೆಸರನ್ನು ತುಂಬ ಪ್ರೀತಿಯಿಂದ ಆಯ್ಕೆ ಮಾಡಿದ್ದಾರೆಂದು ಹೇಳಲು ಸಕಾರಣಗಳಿಲ್ಲ. ವಿವಿಧ ರಾಜಕೀಯ ಕಾರಣಗಳು ಸೇರಿದಂತೆ ಯೆಡಿಯೂರಪ್ಪ ಮುಖ್ಯ ಮಂತ್ರಿ ಆಗುತ್ಥರೆಂಬ ನಿರೀಕ್ಷೆಯಿಂದ ಲಿಂಗಾಯತ ಸಮುದಾಯ ನೀಡಿದ ಬೆಂಬಲ ಬಿಜೆಪಿ ಸರ್ಕಾರ ರಚನೆಗೆ ನೆರವಾಗಿತ್ತು.ಹೀಗಾಗಿ ಲಿಂಗಾಯತರ ಕೋಪ ಎದುರಿಸಬೆಕಾದೀತೆಂಬ ಭಯದಿಂದ ರೆಡ್ಡಿ ಸಹೋದರರು ಶೆಟ್ಟರ್ ಹೆಸರನ್ನು ಮುಂದಿಟ್ಟರು. ಇದೆ ಗಣಿ ದಣಿಗಳು ಹಿಂದೊಮ್ಮೆ ಬಂಡಾಯ ಎದ್ದಾಗ ಮುಂದಿನ ಮುಖ್ಯಮಂತ್ರಿ ಶ್ರೀರಾಮುಲು ಎಂದು ಘೋಷಿಸಿದ್ದರು.ಆದರೆ ಈಗ ರಾಮುಲು ಹೆಸರನ್ನು ಕೈಬಿಟ್ಟಿದ್ದು ಇದೆ ಕಾರಣಕ್ಕೆ.

ಶೆಟ್ಟರ್ ಅವರಿಗೆ ಮಂತ್ಹ್ರಿಯಾಗಬೇಕೆಂಬ ಆಸೆಯೇನೋ ಇತ್ತು. ಸ್ಪೀಕರ್ ಸ್ಥಾನಕ್ಕಿಂತ ಸಚಿವ ಸ್ಥಾನದತ್ತ  ರಾಜಕಾರಣಿಗಳಿಗೆ ಹೆಚ್ಚಿನ  ಆಕರ್ಷಣೆ.ಶೆಟ್ಟರ್ ಸಹ ಇದಕ್ಕಿಂತ ಭಿನ್ನವಾಗಿ ಯೋಚಿಸಿರಲು ಸಾಧ್ಯವಿಲ್ಲ್ಲ.ಆದರೆ ಯಡಿಯೂರಪ್ಪನವರು ಶೆಟ್ಟರ್ ಅವರನ್ನು ಮಂತ್ರಿ ಮಾಡುವ ಬದಲು ಸ್ಪೀಕರ್ ಆಗಿಸಿದರು. ಹಾಗೆ ಧಾರವಾಡ ಕಡೆಯಿಂದ ಇನ್ಯಾರನ್ನೋ ಮಂತ್ರಿ ಮಾಡಿದರು. ಶೆಟ್ಟರ್ ಮುಂದೊಂದು ದಿನ ತಮ್ಮ ಸ್ಥಾನಕ್ಕೆ ಸ್ಪರ್ಧಿಯಾದಾರೆಂಬ ಭಯವೂ ಯಡಿಯೂರಪ್ಪನವರನ್ನು ಕಾಡಿರಬಹುದು. ಇದಕ್ಕೆ ಕಾರಣವೂ ಇದೆ. ಇತಿಹಾಸ ಮರುಕಳಿಸಿದೆ. ಹಿಂದೊಮ್ಮೆ ಯಡಿಯೂರಪ್ಪನವರು ಸೋತು ಸಕಲೇಶಪುರದ ಬಿ.ಬಿ.ಶಿವಪ್ಪನವರು ವಿರೋಧ ಪಕ್ಷದ ನಾಯಕರಾಗಿ ಆಯ್ಕೆ ಆಗಬೇಕಿದ್ದಾಗ ಯಡಿಯೂರಪ್ಪನವರು ಆಗ ಅಷ್ಟೇನೂ ಹೆಸರು ಮಾಡಿರದ ಶೆಟ್ಟರ್ ಅವರನ್ನು ವಿಪಕ್ಷ ನಾಯಕರಾಗುವಂತೆ ಮಾಡಿದ್ದರು. ಯಡಿಯೂರಪಪನವರಿಗಿಂತ ಮುಂಚೆ ಪಕ್ಷ ಕಟ್ಟುವಲ್ಲಿ ಶಿವಪ್ಪ ಮಹತ್ವದ ಪಾತ್ರ ವಹಿಸಿದ್ದರು.ಎ.ಕೆ.ಸುಬ್ಬಯ್ಯ ಅವರನ್ನು ಪಕ್ಷದಿಂದ ಹೊರ ಹಾಕಿದ ನಂತರ ಮುಂದೊಂದು ದಿನ ಬಿಜೆಪಿ ಸರ್ಕಾರ ಬಂದರೆ ಶಿವಪ್ಪನವರೆ ಮುಖ್ಯಮಂತ್ರಿ ಆಗುತ್ತರೆಂಬ ಮಾತುಗಳೂ ಇದ್ದವು.ಈ ಹಿನ್ನೆಲೆಯಲ್ಲಿ ಯಡಿಯೂರಪ್ಪನವರು ಶಿವಪ್ಪನವರನ್ನು ಮೂಲೆಗುಂಪು ಮಾಡುವ ತಂತ್ರ ರೂಪಿಸಿ ಯಶಸ್ಸು ಗಳಿಸಿದ್ದರು.ಈಗ ಯಡಿಯೂರಪ್ಪನವರಿಗೆ ಅದೆಲ್ಲಾ ನೆನಪಾಗುತ್ತಿರಬಹುದು.

ಈ ಎಲ್ಲ ಕಾರಣಗಳಿದ್ದರೂ ಶೆಟ್ಟರ್ ಎಚ್ಚರ ವಹಿಸಬೇಕಾಗಿದೆ. ಅವರು ರೆಡ್ಡಿ ಸಹೋದರರ ಬಲೆಗೆ ಬೀಳದೆ ಮೌನಕ್ಕೆ ಶರಣಾಗುವುದು ಒಳಿತು.  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Powered By Blogger

ಬೆಂಬಲಿಗರು

renukacharya avarannu mantri maadiddu sariye?