ಭಾನುವಾರ, ನವೆಂಬರ್ 8, 2009

ಹೇಡಿಯೂರಪ್ಪ ಶರಣಾಗತಿ

ಎಂಥ ಪರಿಸ್ಥಿತಿಯನ್ನೂ ಎದುರಿಸಲು ಸಿದ್ಧರಾಗಿರುವ Ready ಬ್ರದರ್ಸ್ ಎದುರು  ಹೇಡಿಯೂರಪ್ಪ ಶರಣಾಗಿದ್ದಾರೆ .ಸರ್ಕಾರ ಎಂದರೆ ವ್ಯಾಪಾರ ಎಂಬ ಸಿದ್ಧಾಂತವನ್ನು ಈ ಮೂಲಕ ಬಿಜೆಪಿ ಪ್ರದರ್ಶಿಸಿದೆ.ಸಂಧಾನ ಸೂತ್ರ ನೋಡಿದರೆ ಇನ್ನು ಹೇಡಿಯೂರಪ್ಪ ಕೇವಲ ಯಂತ್ರ ಮಾನವನಂತೆ,ಅರ್ಥಾತ್ ರೊಬೋಟ್ ತರಹ ಕೆಲಸ ಮಾಡಬೇಕಿದೆ.ಯಾಕೆಂದರೆ ಈ ರೊಬೋಟ್ ಹಿಡಿತ ದೆಹಲಿ ದಣಿಗಳಾದ ಸುಷ್ಮಾ ಸ್ವರಾಜ್,ವೆಂಕಯ್ಯ ನಾಯ್ಡು ,ಅರುಣ್ ಜೇಟ್ಲಿ ಕೈಯಲ್ಲಿರುತ್ತದೆ.ಈ ರೊಬೋಟ್ ಮಾಲೀಕರು ಕನ್ನಡಿಗರಾದರೂ ರಿಮೋಟ್ ಮಾಲೀಕರು ವ್ಯಾಪಾರಿಗಳಾದ ರೆಡ್ಡಿಗಳು. ರೋಬೋಟ್ಗೆ ಸ್ವತಂತ್ರ ನಿರ್ವಹಣೆಯ ಶಕ್ತಿ ಇಲ್ಲದ ಕಾರಣ ಅದು ಏನು ಮಾಡಬೇಕೆಂಬ ಫೀಡ್ ರೆಡ್ಡಿಗಳು ಒದಗಿಸುತ್ತಾರೆ.ಅಂದರೆ ಯಡಿಯೂರಪ್ಪನವರು ಬೆನ್ನು ಮೂಳೆ ಇಲ್ಲದ,ಮೆದುಳಿಲ್ಲದ ಪರಾವಲಂಬಿ ಸೇವಕರಾಗಿರುತ್ತಾರೆ.ಇನ್ನು ಅವರು ಮುಖ್ಯಮಂತ್ರಿಯಾಗಿರುವುದರಲ್ಲಿ ಅರ್ಥವೂ ಇಲ್ಲ.ಪ್ರಜಾಸತ್ತೆಯನ್ನೇ ಅಣಕಿಸುವಂಥ ತೀರ್ಮಾನವನ್ನು ಬಿಜೆಪಿ ವರಿಷ್ಟರು ಕೈಗೊಂಡ ಮೇಲೆ ಯಡಿಯೂರಪ್ಪನವರು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ಪ್ರಶ್ನೆಯೇ ಇಲ್ಲ.ಪ್ರಜಾಸತ್ತೆ ಅಂದರೆ ಮುಖ್ಯಮಂತ್ರಿ ಸರ್ವಾಧಿಕಾರಿ ಅಲ್ಲ ನಿಜ. ಆದರೆ ಆಯ್ಕೆ ಮಾಡಿದ ಮತದಾರರ ನೋವು ನಲಿವಿಗೆ ಸ್ಪಂದಿಸುವ ಬದಲು ದೆಹಲಿ ದಣಿಗಳು ಮತ್ತು ಭೂಮಿ ಕೊಳ್ಳೆ ಹೊಡೆಯುವ ಮಂದಿಯ ಅನುಕೂಲಕ್ಕೆ ತಕ್ಕಂತೆ ನರ್ತಿಸುವುದಕ್ಕೆ ಯಡಿಯೂರಪ್ಪನವರೇ ಯಾಕೆ ಬೇಕು? ದುಷ್ಟ ರೆಡ್ಡಿ ಕೂಟದ ಮಂತ್ರಿಗಳನ್ನು ವಜಾ ಮಾಡಿ ಅಂಥವರ ಮೇಲೆ ಶಕ್ತಿ ಪ್ರದರ್ಶಿಸುವ ಅಡಿಯೂರಪ್ಪ ಆಗಬೇಕಿತ್ತೇ ಹೊರತು ಹೇಡಿಯೂರಪ್ಪ ಆಗಬಾರದಿತ್ತು.   

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Powered By Blogger

ಬೆಂಬಲಿಗರು

renukacharya avarannu mantri maadiddu sariye?